ಬೆಳಗಲಿ ಮನೆ-ಮನಗಳಲಿ
ಕನ್ನಡದ ಜ್ಯೋತಿ
ಹರಡಲಿ,ಸಾಗಲಿ
ಡಿಕ್ದಿಗಂತಗಳ ದಾಟಿ
ಸುರ ವಾಣಿ ಇದು
ಮನಕೆ ತಂಪು, ಕೇಳಲು ಇಂಪು
ನಭವೆಲ್ಲಾ ಆವರಿಸಲಿ
ಕನ್ನಡ ಕಸ್ತೂರಿಯ ಕಂಪು
ಅನ್ಯ ಭಾಷೆಗಳೂ ಇರಲಿ
ಸೋದರರ ರೀತಿ
ಕರುನಾಡ ಮೇಲೆ ಇರಲಿ
ಅಪರಿಮಿತ ಪ್ರೀತಿ
ಕನ್ನಡ ಹಬ್ಬದಂದು
ಮನದ ಆಸೆ ಈ ಕವನ
ಕರುನಾಡ ತಾಯಿಯ ಪಾದಕೆ
ಕಿರಿಯನ ಪುಟ್ಟ ನುಡಿ ನಮನ
Sunday, November 1, 2009
Subscribe to:
Posts (Atom)